

20th May 2026

ಬಳ್ಳಾರಿ: ಮೇ,20-ಪ್ರಸಕ್ತ ಮುಂಗಾರಿನ ಮೊದಲ ಮಳೆಗೆ ನಗರಕ್ಕೆ ತಂಪು ತಂದರೂ. ಅದರಿಂದ ಅನೇಕ ನಷ್ಟಗಳನ್ನು ತಂದೊಡ್ಡಿದೆ.ಗಿಡ ಮರಗಳು ಧರೆಗುರುಳಿವೆ. ಮನೆಗಳು ಕುಸಿದಿವೆ. ತಗ್ಗು ಪ್ರದೇಶದಲ್ಲಿನ ಮನೆ, ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿವೆ. ಅನೇಕ ಕಡೆ ಮಳೆ ನೀರು ಸರಾಗವಾಗಿ ಹರಿಯದೆ ಮಡುಗಟ್ಟಿದೆ. ಅಂದಾಜಿನ ಪ್ರಕಾರ 40 ಮಿ.ಮೀ. ಮಳೆ ಬಿದ್ದಿದೆಯಂತೆ.
ನಿನ್ನೆ ಸಂಜೆ ನಗರದಲ್ಲಿ ಸುರಿದ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ತೆರೆದ ಚರಂಡಿಗಳನ್ನು ಪಾಲಿಕೆ ಸರಿಯಾದ ರೀತಿಯಲ್ಲಿ ಸ್ವಚ್ಚಗೊಳಿಸದ ಕಾರಣ ಅವು ತುಂಬಿ ಹರಿದು ರಸ್ತೆಗಳ ಮೂಲಕ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿವೆ.
ಬೀಸಿದ ಬಿರುಗಾಳಿಗೆ ಎಪಿಎಂಸಿ ಸೇರುದಂತೆ ಅನೇಕ ಕಾಲೋನಿಗಳಲ್ಲಿನ 500 ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಬಿಸಿಲುನ ತಾಪ ತಡೆಯಲು ಕಂಟೋನ್ ಮೆಂಟ್ ಬಳಿ ಹಾಕಿದ್ದ ಹಸಿರು ಪರದೆ ವ್ಯವಸ್ಥೆ ಕುಸಿದು ಬಿದ್ದಿದೆ.
ಇನ್ನು ಕೋಟ್ಯಾಂತರ ರೂಪಾಯಿ ವೆಚ್ಚದಿಂದ ಅಭಿವೃದ್ಧಿ ಪಡಿಸಿದ ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಮಳೆ ನೀರು ಹೊರಗೆ ಹರಿದು ಹೋಗುವ ಅವ್ಯವಸ್ಥೆಯಿಂದ ಸಿಂಥಟಿಕ್ ಟ್ರಾಕ್, ಸುತ್ತಮುತ್ತ ನೀರು ಮಲೆ ನಿಂತಿದೆ.
ಅನೇಕ ಕಡೆಗಳಲ್ಲಿ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಸಹ ಉರುಳಿ ಬಿದ್ದಿವೆ. ಇದರಿಂದ ರಾತ್ರಿ ಇಡೀ ಅನೇಕ ಪ್ರದೇಶಗಳಲ್ಲಿ ಕತ್ತಲು ಆವರಿಸಿತ್ತು.
ಅವಾಂತರಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಈಗಲೇ ಪಾಲಿಕೆ ತೆರೆದ ಚರಂಡಿ, ರಾಜಕಾಲುವೆಗಳಲ್ಲಿನ ಹೂಳನ್ನು ತೆಯುವ ಕಾರ್ಯ ಭರದಿಂದ ಸಾಗಬೇಕಿದೆ.
ಬಳ್ಳಾರಿ: ಮೇ,20-ಪ್ರಸಕ್ತ ಮುಂಗಾರಿನ ಮೊದಲ ಮಳೆಗೆ ನಗರಕ್ಕೆ ತಂಪು ತಂದರೂ. ಅದರಿಂದ ಅನೇಕ ನಷ್ಟಗಳನ್ನು ತಂದೊಡ್ಡಿದೆ.ಗಿಡ ಮರಗಳು ಧರೆಗುರುಳಿವೆ. ಮನೆಗಳು ಕುಸಿದಿವೆ. ತಗ್ಗು ಪ್ರದೇಶದಲ್ಲಿನ ಮನೆ, ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿವೆ. ಅನೇಕ ಕಡೆ ಮಳೆ ನೀರು ಸರಾಗವಾಗಿ ಹರಿಯದೆ ಮಡುಗಟ್ಟಿದೆ. ಅಂದಾಜಿನ ಪ್ರಕಾರ 40 ಮಿ.ಮೀ. ಮಳೆ ಬಿದ್ದಿದೆಯಂತೆ.
ನಿನ್ನೆ ಸಂಜೆ ನಗರದಲ್ಲಿ ಸುರಿದ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ತೆರೆದ ಚರಂಡಿಗಳನ್ನು ಪಾಲಿಕೆ ಸರಿಯಾದ ರೀತಿಯಲ್ಲಿ ಸ್ವಚ್ಚಗೊಳಿಸದ ಕಾರಣ ಅವು ತುಂಬಿ ಹರಿದು ರಸ್ತೆಗಳ ಮೂಲಕ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿವೆ.
ಬೀಸಿದ ಬಿರುಗಾಳಿಗೆ ಎಪಿಎಂಸಿ ಸೇರುದಂತೆ ಅನೇಕ ಕಾಲೋನಿಗಳಲ್ಲಿನ 500 ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಬಿಸಿಲುನ ತಾಪ ತಡೆಯಲು ಕಂಟೋನ್ ಮೆಂಟ್ ಬಳಿ ಹಾಕಿದ್ದ ಹಸಿರು ಪರದೆ ವ್ಯವಸ್ಥೆ ಕುಸಿದು ಬಿದ್ದಿದೆ.
ಇನ್ನು ಕೋಟ್ಯಾಂತರ ರೂಪಾಯಿ ವೆಚ್ಚದಿಂದ ಅಭಿವೃದ್ಧಿ ಪಡಿಸಿದ ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಮಳೆ ನೀರು ಹೊರಗೆ ಹರಿದು ಹೋಗುವ ಅವ್ಯವಸ್ಥೆಯಿಂದ ಸಿಂಥಟಿಕ್ ಟ್ರಾಕ್, ಸುತ್ತಮುತ್ತ ನೀರು ಮಲೆ ನಿಂತಿದೆ.
ಅನೇಕ ಕಡೆಗಳಲ್ಲಿ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಸಹ ಉರುಳಿ ಬಿದ್ದಿವೆ. ಇದರಿಂದ ರಾತ್ರಿ ಇಡೀ ಅನೇಕ ಪ್ರದೇಶಗಳಲ್ಲಿ ಕತ್ತಲು ಆವರಿಸಿತ್ತು.
ಅವಾಂತರಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಈಗಲೇ ಪಾಲಿಕೆ ತೆರೆದ ಚರಂಡಿ, ರಾಜಕಾಲುವೆಗಳಲ್ಲಿನ ಹೂಳನ್ನು ತೆಯುವ ಕಾರ್ಯ ಭರದಿಂದ ಸಾಗಬೇಕಿದೆ.

ಮಹಾನ್ ಮಾನವತಾವಾದಿ ಜ್ಯೋತಿರಾವ್ ಪುಲೆ ಅವರ ಜೀವನ ವ್ಯಕ್ತಿತ್ವ ಮಕ್ಕಳು ಬೆಳಿಸಿಕೊಳ್ಳಲು ಕರೆ

ದಾಸ ಸಾಹಿತ್ಯದಲ್ಲಿ ಅನುಪಮ ಸೇವೆಗೈದ ವರ್ಷದ ಶ್ರೇಷ್ಠ ವ್ಯಕ್ತಿಗಳಿಗೆ ಶ್ರೀಗಳವರಿಂದ "ವಿಶ್ವಮಾನ್ಯ ಪ್ರಶಸ್ತಿ"